Sunday, September 21, 2008

ಹೀಗೊಂದು ಕಳಕಳಿ


"ದಾರಿಯಲ್ಲಿ ಸಿಕ್ಕ ಐದು ಡಾಲರ್ ಗಿಂತ ಸ್ವಂತವಾಗಿ ಸಂಪಾದಿಸಿದ ಒಂದು ಡಾಲರ್ ಬೆಲೆ ಜಾಸ್ತಿ ಎಂದು ಕಲಿಸಿರಿ , ಶಾಲೆಯಲ್ಲಿ ನಪಾಸಗುವುದು ಮೋಸ ಮಾಡುವುದಕ್ಕಿಂತಲೂ ಹೆಚ್ಚು ಗೌರವವಾದದ್ದು ಎಂದು ಭೋದಿಸಿ , ಎಲ್ಲರೂ ಅವನ ಅಭಿಪ್ರಾಯಗಳು , ಕಲ್ಪನೆಗಳು ತಪ್ಪೆಂದು ಹೇಳಿದರೂ ಅದರ ಬಗ್ಗೆ ನಂಬಿಕೆ ಇರಿಸಿಕೊಳ್ಳಲು ತಿಳಿಸಿ "

ಈ ಮಾತನ್ನು ಅಬ್ರಹಾಂ ಲಿಂಕನ್ ತನ್ನ ಮಗನ ಶಿಕ್ಷಕನಿಗೆ ಬರೆದ ಪತ್ರವೊಂದರ ಸಾಲು , ಈಗಿನ ಮಕ್ಕಳ ಮನ ಪರಿಸ್ಥಿತಿ ಹೇಗಿದೆಯಂದರೆ ಶಾಲೆಯಲ್ಲಿ ಫೇಲ್ ಆದ ಮಾತ್ರಕ್ಕೆ ಆತ್ಮಹತ್ಯೆಗೆ ಶರಣಾಗುತ್ತಾರೆ , ಬರೀ ಫೇಲಾದ ಮಾತ್ರಕ್ಕೆ ವಿದ್ಯರ್ಥಿಯೂಬ್ಬ ಆತ್ಮಹತ್ಯೆ ಮಾಡಿಕೊಂಡ ಎಂಬ ಮಾತು ಒಪ್ಪುವಂತದ್ದಲ್ಲ , ಅವನ ಆತ್ಮಹತ್ಯೆ ಹಿಂದೆ ಅವನ ಪೋಷಕರು ಒಂದಲ್ಲ ಒಂದು ರೀತಿ ಕಾರಣರಾಗಿರುತ್ತಾರೆ, ಆತನಲ್ಲಿ ಆತ್ಮ ವಿಶ್ವಾಸವನ್ನು ತುಂಬುವಲ್ಲಿ ವಿಫಲರಾಗಿರುತ್ತಾರೆ .

ಕೆಲವು ದೇಶಗಳಲ್ಲಿ ಫೇಲ್ ಎಂಬ ಪದ ಬಳಕೆಯಲ್ಲಿಲ್ಲ ಬದಲಾಗಿ ಅದನ್ನು deffered success ಎಂದು ಕರೆಯುತ್ತಾರೆ ಅಂದರೆ ಯಶಸ್ಸನ್ನು ಮುಂದೂಡಲಾಗಿದೆ ಎಂದು ಅರ್ಥ . ಎಷ್ಟೋ ಪೋಷಕರು ತಮ್ಮ ಮಕ್ಕಳಿಗೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಟ್ಟಿರುತ್ತಾರೆ .Comuter, ಪ್ರತ್ಯೇಕ ಕೊಠಡಿ , ಬೈಕು , ಮೊಬೈಲು , ಜೀಬು ತುಂಬುವಷ್ಟು ಹಣ . ಹೇಗೆಂದರೆ ಒಂದು ಸುಂದರ ಹೂ ತೋಟ ಮಾಡಿ ಅದಕ್ಕೆ ಸರಿಯಾಗಿ ಕಾವಲು ಕಾಯದೆ ಬ್ಯುಸಿ ಆಗಿಬಿಟ್ಟಿರ್ತಾರೆ. ಉಸಿರು ಕಟ್ಟಿಸುವ ಸ್ಪರ್ದೆಯ ನಡುವೆ ನಗು , ಕಣ್ಣೀರು , ನೀಲಾಕಾಶ, ಬೆಟ್ಟ ಗುಡ್ಡ , ಬಳ್ಳಿ , ಹೂಗಳು ಎಲ್ಲವನ್ನು ಆ ಪುಟ್ಟ ಹುಡುಗ ಮರೆತು ತನ್ನ ಮನಸ್ಸಿಗೆ ಬೇಡವಾದ ಹಾಗು ಬಿಡಿಸಲಾಗದ ಒಂದು ತರಹನಾದ ವಿಕೃತ ಏಕಾಂತಕ್ಕೆ ಸಿಕ್ಕು ಗಾವುದ ಗಾವುದ ದೂರ ಕಳೆದು ಹೋಗಿರುತ್ತಾನೆ .

ಇಲ್ಲಿ ತಂದೆ ತಾಯಂದಿರು ಕೊಂಚ ಎಚ್ಚರವಹಸಿ ಮಕ್ಕಳೊಡನೆ time spend ಮಾಡಿದ್ದೆ ಆದರೆ ಜೀವನದಲ್ಲಿ ಎಂಥಾ ಕಷ್ಟ ಬಂದರೂ ಅದನ್ನು ಎದಿರಿಸುವ ಧೈರ್ಯ ಮತ್ತು ಆತ್ಮ ವಿಶ್ವಾಸ ಬಂದಿರುತ್ತದೆ . ಅವನು ಎಂದಿಗೂ ಉತ್ತಮ ಮತ್ತು ಆದರ್ಶ ವಿದ್ಯಾರ್ಥಿ . ಲಿಂಕನ್ನ ಮೇಲಿನ ಮಾತು ಪ್ರತಿಯೊಬ್ಬ ಪೋಷಕನಿಗೆ ಪಾಠವಾಗಬೇಕು .



(೨೦೦೬ - ಸುಧಾ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ )

1 comment:

ಚರಿತಾ said...

nija santhosh,
poshakaru elliyavarege makkalannu mechanical aagi treat maadtaaro alliyavarege makkalige tamma nijavaada baalya galisikollavudu kashta..!
hana sampaadaneya huchchu bhrameye idakkella kaarana..:(