Thursday, September 25, 2008

ನಮ್ ಮನೆ

ಮೈಸೂರಿಂದ ಸುಮಾರು ೫೫ ಕಿ. ಮೀ ದೂರದಲ್ಲಿರುವ ಚಾಮರಾಜನಗರದಲ್ಲಿ (ಈಗ ಪ್ರತ್ಯೇಕ ಜಿಲ್ಲೆ) ನಮ್ ಮನೆ ಇದೆ , ನೀವು ಅಂದುಕೊಳ್ಳಬಹುದು ಅದೇನು ದೊಡ್ಡ ವಿಷಯ ಅಂತ, ಎಲ್ಲಾರ್ ಮನೇನು ಒಂದಲ್ಲ ಒಂದು ಊರಲ್ಲಿ ಇದ್ದೆ ಇರುತ್ತೆ. ಆದ್ರೆ ನಮ್ ಮನೆ ಈ ಭೂಮಿ ಮೇಲಿರೋ ಎಲ್ಲಾ ಮನೆಗಳಿಗಿಂತ ತುಂಬ ಸ್ಪೆಷಲ್. ಅಲ್ಲಿ ನನ್ ಅಣ್ಣ ಜಯದೇವ್ ಇದ್ದಾರೆ , ನಿಮಗೆ ಗೊತ್ತಿರ್ಲಿಕ್ಕಿಲ್ಲ ಅವ್ರು ರಾಷ್ಟ್ರ ಕವಿ ಜಿ . ಎಸ್ . ಶಿವರುದ್ರಪ್ಪ ಅವರ ಮಗ . ಅಂದ ಹಾಗೆ ನಮ್ ಮನೆ ಹೆಸರು "ದೀನಬಂಧು" ಮೊದಲು ನಮ್ ಅಣ್ಣ ನಾವು ನಾಲ್ಕು ಮಕ್ಕಳಿಗೆ ಮಾತ್ರ ಅಣ್ಣ ಆಗಿದ್ರು ಈಗ ಐವತ್ತು ಮಕ್ಕಳಿಗೆ ಅಣ್ಣ ... ದೀನಬಂಧು ಒಂದು ಮಕ್ಕಳ ಮನೆ , ನಾನು ಬೆಳದ ಮನೆ ಅನ್ನುವುದಕ್ಕಿಂತಲೂ ಬದುಕಲು ಕಲಿಸಿದ ಮನೆ ಅನ್ನಬಹುದು.

ಅಣ್ಣನ ಎದೆ ಮೇಲೆ ತಲೆಯೊಡ್ಡಿ ಚಂದಮಾಮನ ಕಥೆ ಕೇಳಿದ್ದು , ಅದೇ ಅಣ್ಣನ ಜೇಬಿನಿಂದ ಹಣ ಕದ್ದು ಬಾಸುಂಡೆ ಏಟು ತಿಂದು ಊಟ ಮಾಡದೆ ಮಲಗಿದಾಗ , ಅಣ್ಣ ಮತ್ತೆ ಎಬ್ಬಿಸಿ ಮುದ್ದು ಮಾಡಿ ಊಟ ಮಾಡಿಸಿದ್ದು ನೆನಪಾದಗೆಲ್ಲ ಬಾಯಲ್ಲಿನ ಎಂಜಲು ಗಂಟಲೊಳಗೆ ಇಳಿಯಲು ತಿನುಕ್ಕಾಡುತ್ತದೆ. ನೆನಪುಗಳೇ ಹಾಗೆ "ಈಗ ತಾನೆ ಯಾರೂ ಪಕ್ಕದಲ್ಲಿ ಕೂತು ಎದ್ದು ಹೋದ ಹಾಗೆ"

ರೇಡಿಯೋದಲ್ಲಿ "ಜ್ಯೋತಿ ಕಲಶ ವಿಠ್ಠಲ" ಹಾಡು ಬರುತ್ತಿದೆ ...ಅಣ್ಣ ತುಂಬ ಇಷ್ಟ ಪಟ್ಟು ಕೊಳಲಿನಲ್ಲಿ ನುಡಿಸುತಿದ್ದ ಹಾಡು ಅದು (ಯಾವ ರಾಗ ಅಂತ ಸರಿಯಾಗಿ ಗೊತ್ತಿಲ್ಲ), homesick ಸಿಕ್ಕಾಪಟ್ಟೆ ಕಾಡ್ತಾ ಇದೆ ಕಂಡ್ರಿ .. ಒಂದ್ ವಾರ ಆಫೀಸಿಗೆ ರಜೆ ಹಾಕಿ ಮನೆಗೆ ಹೊರಟಿದ್ದೀನಿ .. ಹಳೆ ನೆನಪುಗಳನ್ನು ಕೆದಕಲು .. ನಮ್ ಮನೆ , ನಮ್ ಅಣ್ಣನ ನೋಡೋ ಆಸೆ ಇದ್ರೆ ಖಂಡಿತ ನನ್ ಜೊತೆ ಬನ್ನಿ .....

Wednesday, September 24, 2008

ನೆನಪಿನ ಕಂತೆಯಲ್ಲೊಂದು

ಕಾಲೇಜಿನಲ್ಲಿ ಗೆಳೆಯರು ಸಿನಿಮಾಕ್ಕೆ ಕರೆದಾಗ ಇಲ್ಲದ ಕಾರಣವೊಡ್ಡಿ ತಪ್ಪಿಸಿದ್ದೆ , ಎಷ್ಟೋ ಮದ್ಯಾನದ ಊಟದ ಬದಲು ಬನ್ನು, ಟೀ repace ಮಾಡಿದ್ದಿವೆ , ಅಂಗಡಿಯಲ್ಲಿ ಕೊಂಡು ತಂದ ಒಂದು lifebuoy ಸೋಪನ್ನು ತುಂಡು ತುಂಡು ಮಾಡಿ ಮೂರೂವರೆ ತಿಂಗಳು ಬಳಸಿದ್ದಿದೆ .. ಈಗಲೂ ನೆನೆಪಿದೆ , ನನ್ನಲಿದ್ದದ್ದು ನಾಲ್ಕು ಪ್ಯಾಂಟು ಮತ್ತು ಮೂರೂ ಶರ್ಟು , ಎರಡು ಪ್ಯಾಂಟಿಗೆ ಜಿಪ್ ಸರಿ ಇರ್ಲಿಲ್ಲ ..

ಇನ್ನು ಪ್ರತಿ ಶನಿವಾರ ಮತ್ತು ಭಾನುವಾರ ಯಾದವಗಿರಿ ರಾಮಕೃಷ್ಣ ಆಶ್ರಮಕ್ಕೆ ಹಾಜರ್ ಖಂಡಿತ ಧ್ಯಾನ ಮಾಡ್ಲಿಕ್ಕೆ ಹೋಗ್ತಾ ಇರ್ಲಿಲ್ಲ , ಭಾನುವಾರ ರುಚಿಯಾದ ಅಡುಗೆ ಮಾಡ್ತಿದ್ರು with fruit salad . ಅಲ್ಲೊಬ್ಬರು ಸ್ವಾಮೀಜಿ ಜೊತೆ ದೇವ್ರು ಇಲ್ಲ ಅಂತ ವಾದ ಮಾಡಿ ದೊಡ್ಡ್ ಸ್ವಾಮೀಜಿ ಹತ್ರ ಬೈಸಿಕೊಂಡದ್ದು ಮರಿಯೋಕೆ ಸಾದ್ಯ ಇಲ್ಲ , ಆಶ್ರಮದಲ್ಲಿದ್ದ ಸೈಕಲ್ ನಂದೇ ಆಗಿತ್ತು ....ಯಾವ ಕಂಪನಿ ಸೈಕಲ್ ಅಂತ ಕೇಳ್ ಬೇಡಿ ... ಹ್ಯಾಂಡ್ ಲ್ಲು , ಪೆಡಲ್ ಎಲ್ಲಾ ಬೇರೆ ಬೇರೆ ಕಂಪನಿದು ... ಒಂದ್ ತರ crossbreed .. ನಾನ್ ಅದಕ್ಕೆ ಕರಿ ಪೇಯಿಂಟ್ ಹೊಡ್ತು ಕರಿಯ ಅಂತ ಹೆಸರು ಕೊಟ್ಟಿದ್ದೆ ... ದಾರಿನಲ್ಲಿ ಹೋಗಬೇಕಾದರಂತು ವಿಚಿತ್ರ ಸೌಂಡು ..ಥೇಟ್ ಅಲ್ಲೊಬ್ರು ಸ್ವಾಮೀಜಿ ಗೊರಕೆ ಸೌಂಡ್ ತರ . ಎಷ್ಟೋ ಸಲ Mysore to Nanjangud ಅದೇ ಸೈಕಲ್ ನಲ್ಲಿ ಹೋಗಿದೀನಿ ... ಹುಚ್ಹಂತರ ಆ ಸೈಕಲ್ ಜೊತೆ ಮನಸ್ಸಿಗೆ ಬಂದದ್ದು ಮಾತಾಡಿದ್ದೀನಿ .

ನಿಜಕ್ಕೂ ಅದು ನನ್ನ ತಾಳ್ಮೆಯ ದಿನಗಳು , ಜೇಬಿನಲ್ಲಿ ಐದು ರುಪಾಯೀ ಇದ್ರೆ ಕೊನೆ ಪಕ್ಷ ಒಂದು ತಿಂಗಳು ಇಟ್ಟಿ ಕೊಳ್ತಾ ಇದ್ದೆ .. ಆದ್ರೆ ಇವತ್ತು ಒಂದ್ ಮೊಬೈಲು ಸಾಕಾಗಲ್ಲ ಅಂತ ಇನೊಂದು , ಅಂಗಡಿ ಮುಂದೆ ಕಾಣುವ ಕಂಡ ಕಂಡ ಶರ್ಟು ಪ್ಯಾಂಟು ತಗೊಂಡು ಬೀರುನಲ್ಲಿ stock ಆಗಿ ಒಗಿಯೋಕೆ ಆಗದೇನೆ ತುಂಬಿ ಹೋಗಿದೆ , ನಿಜಕ್ಕೂ ಮತ್ತೆ ಆ ತಾಳ್ಮೆಯ ದಿನಗಳಿಗೆ ಮರಳ ಬೇಕು ಅನ್ನಿಸುತ್ತದೆ ..!!!

ಗಾಂಧಿ ಹೇಳಿದ ಮಾತು ಸತ್ಯ " ಅಗತ್ಯಕಿಂತ ಹೆಚ್ಚಾಗಿ ಸಂಗ್ರಹಿಸುವುದು ಒಂದು ತರಹದ ಕಳ್ಳತನ" ....ಪ್ರಯತ್ನವೊಂತು ನಡೀತಿದೆ ......

Tuesday, September 23, 2008

Quality ಬದುಕು ಅದಕ್ಕೊಂದು Acknowledgement

ಎಷ್ಟೂ ಜನ ಜೀವನದಲ್ಲಿ ಬರುವ ಸಣ್ಣ ಸಣ್ಣ ಆನಂದವನ್ನು ಮರೆತಿರುತ್ತಾರೆ , ಸುಮಾರು ದಿನಗಳ ನಂತರ ಮಳೆ ಬಂದಾಗ ಗಮ್ಮ್ ಎನ್ನುವ ಮಣ್ಣಿನ ಸುವಾಸನೆ ಸವಿಯಲು ಮರೆತಿರುತ್ತಾರೆ , ಸಣ್ಣ ಮಗುವೊಂದು ನಮ್ಮನು ನೋಡಿ ನಿಷ್ಕಲ್ಮಶ ನಗೆ ಬೀರಿದಾಗ ಮನ್ನಸ್ಸು ಅರಳದೆ ಆಕಾಶ ತಲೆ ಮೇಲೆ ಬಿಟ್ಟವರ ಹಾಗೆ ಯೋಚನೆ ಮಾಡುತ್ತಾ ಹೊರಟಿರುತ್ತಾರೆ , ಕೊನೆಗೆ ಅವರಿಗೆ ಒಂದೊಳ್ಳೆ ಪುಸ್ತಕ , ಹಾಡು, ಸಂಗೀತ ಯಾವುದು ರುಚಿಸುವುದಿಲ್ಲ . ಅಂತವರು ಬಾಯಿ ಬಿಟ್ಟರೆ ..."ಬಿಡು ಗುರೂ ಕೊನೆವರಗೂ ಗೂಟ ಹೊಡ್ಕೊಂಡ್ ಇರ್ತಿವ ", "ಓದಿ ಯಾರ್ ಉದ್ದಾರ ಆಗಿದ್ದರೆ ಬಿಡು ಗುರು" ಇರೋವರ್ಗೂ life enjoy ಮಾಡಬೇಕು ....

ನಿಜ life enjoy ಮಾಡಬೇಕು .. ರಾತ್ರಿ ಆಯಿತು ಅಂದ್ರೆ ಕಂಠ ಪೂರ್ತಿ ಕುಡ್ತು, ದಾರೀಲಿ ಸಿಕ್ಕ ಮಾಂಸ ತಿಂದು ಯಾವುದೋ ಹೆಣ್ಣಿನ ಹಿಂದೆ ಹೋಗುವ ತಲೆ ಮಾಸಿದವನು ಅವನದೇ ಆದ ಶೈಲಿನಲ್ಲಿ life enjoy ಮಾಡ್ತಾ ಇರ್ತಾನೆ , ಹೊತ್ತಿಗೆ ಮುಂಚೆ ಮನೆ ಸೇರಿ ಒಂದಷ್ಟೊತ್ತು TV ನೋಡಿ , ಪುಸ್ತಕ ಓದಿ , ಮಕ್ಕಳಿಗೆ ಚಂದ ಮಾಮ ನ ಕಥೆ ಹೇಳ್ತಾ ಊಟ ಮಾಡೋವ್ನು ಅವನದೇ ಶೈಲಿನಲ್ಲಿ life enjoy ಮಾಡ್ತಾ ಇರ್ತಾನೆ , ಇವನಿಗೆ ಲೈಫ್ ನಲ್ಲಿ ಸಿಗೋ Acknowledgement ಅಂದ್ರೆ ಬದುಕುವ ಹುಮ್ಮಸ್ಸು ..ಅದೇ ಆ ತಲೆ ಮಾಸಿದವನಿಗೆ ಸಿಗೋದು ..30 ವರ್ಷಕ್ಕೆನೆ ಗೂಟ ಕಿತ್ಕೊಂಡು ಹೋಗೋದು , ಬದುಕು ಇದಲ್ಲ ..ಒಳ್ಳೆಯ quality ಬದುಕು ಬಾಳಬೇಕು ..ನಿಜ ಒಂದೇ ದಿನದಲ್ಲಿ ಇಡೀ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಲು ಸಾದ್ಯ ಇಲ್ಲ ... ಪ್ರತಿ ದಿನದ resolution ಗಳು , ಹೊಸ ನಿರ್ಧಾರಗಳು ನೂತನ ಬದಲಾವಣೆಯತ್ತ ಕೊಂಡೊಯ್ಯ ಬೇಕು ...ಪ್ರತಿ ದಿನದ ಆಲೋಚನೆಗಳು ಹೊಸತಗಿರಬೇಕು .. ಬದಲಾಗಬೇಕು , ನಮಗೋಸ್ಕರ ಬದಲಾಗಬೇಕು ...

Sunday, September 21, 2008

ಹೀಗೊಂದು ಕಳಕಳಿ


"ದಾರಿಯಲ್ಲಿ ಸಿಕ್ಕ ಐದು ಡಾಲರ್ ಗಿಂತ ಸ್ವಂತವಾಗಿ ಸಂಪಾದಿಸಿದ ಒಂದು ಡಾಲರ್ ಬೆಲೆ ಜಾಸ್ತಿ ಎಂದು ಕಲಿಸಿರಿ , ಶಾಲೆಯಲ್ಲಿ ನಪಾಸಗುವುದು ಮೋಸ ಮಾಡುವುದಕ್ಕಿಂತಲೂ ಹೆಚ್ಚು ಗೌರವವಾದದ್ದು ಎಂದು ಭೋದಿಸಿ , ಎಲ್ಲರೂ ಅವನ ಅಭಿಪ್ರಾಯಗಳು , ಕಲ್ಪನೆಗಳು ತಪ್ಪೆಂದು ಹೇಳಿದರೂ ಅದರ ಬಗ್ಗೆ ನಂಬಿಕೆ ಇರಿಸಿಕೊಳ್ಳಲು ತಿಳಿಸಿ "

ಈ ಮಾತನ್ನು ಅಬ್ರಹಾಂ ಲಿಂಕನ್ ತನ್ನ ಮಗನ ಶಿಕ್ಷಕನಿಗೆ ಬರೆದ ಪತ್ರವೊಂದರ ಸಾಲು , ಈಗಿನ ಮಕ್ಕಳ ಮನ ಪರಿಸ್ಥಿತಿ ಹೇಗಿದೆಯಂದರೆ ಶಾಲೆಯಲ್ಲಿ ಫೇಲ್ ಆದ ಮಾತ್ರಕ್ಕೆ ಆತ್ಮಹತ್ಯೆಗೆ ಶರಣಾಗುತ್ತಾರೆ , ಬರೀ ಫೇಲಾದ ಮಾತ್ರಕ್ಕೆ ವಿದ್ಯರ್ಥಿಯೂಬ್ಬ ಆತ್ಮಹತ್ಯೆ ಮಾಡಿಕೊಂಡ ಎಂಬ ಮಾತು ಒಪ್ಪುವಂತದ್ದಲ್ಲ , ಅವನ ಆತ್ಮಹತ್ಯೆ ಹಿಂದೆ ಅವನ ಪೋಷಕರು ಒಂದಲ್ಲ ಒಂದು ರೀತಿ ಕಾರಣರಾಗಿರುತ್ತಾರೆ, ಆತನಲ್ಲಿ ಆತ್ಮ ವಿಶ್ವಾಸವನ್ನು ತುಂಬುವಲ್ಲಿ ವಿಫಲರಾಗಿರುತ್ತಾರೆ .

ಕೆಲವು ದೇಶಗಳಲ್ಲಿ ಫೇಲ್ ಎಂಬ ಪದ ಬಳಕೆಯಲ್ಲಿಲ್ಲ ಬದಲಾಗಿ ಅದನ್ನು deffered success ಎಂದು ಕರೆಯುತ್ತಾರೆ ಅಂದರೆ ಯಶಸ್ಸನ್ನು ಮುಂದೂಡಲಾಗಿದೆ ಎಂದು ಅರ್ಥ . ಎಷ್ಟೋ ಪೋಷಕರು ತಮ್ಮ ಮಕ್ಕಳಿಗೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಟ್ಟಿರುತ್ತಾರೆ .Comuter, ಪ್ರತ್ಯೇಕ ಕೊಠಡಿ , ಬೈಕು , ಮೊಬೈಲು , ಜೀಬು ತುಂಬುವಷ್ಟು ಹಣ . ಹೇಗೆಂದರೆ ಒಂದು ಸುಂದರ ಹೂ ತೋಟ ಮಾಡಿ ಅದಕ್ಕೆ ಸರಿಯಾಗಿ ಕಾವಲು ಕಾಯದೆ ಬ್ಯುಸಿ ಆಗಿಬಿಟ್ಟಿರ್ತಾರೆ. ಉಸಿರು ಕಟ್ಟಿಸುವ ಸ್ಪರ್ದೆಯ ನಡುವೆ ನಗು , ಕಣ್ಣೀರು , ನೀಲಾಕಾಶ, ಬೆಟ್ಟ ಗುಡ್ಡ , ಬಳ್ಳಿ , ಹೂಗಳು ಎಲ್ಲವನ್ನು ಆ ಪುಟ್ಟ ಹುಡುಗ ಮರೆತು ತನ್ನ ಮನಸ್ಸಿಗೆ ಬೇಡವಾದ ಹಾಗು ಬಿಡಿಸಲಾಗದ ಒಂದು ತರಹನಾದ ವಿಕೃತ ಏಕಾಂತಕ್ಕೆ ಸಿಕ್ಕು ಗಾವುದ ಗಾವುದ ದೂರ ಕಳೆದು ಹೋಗಿರುತ್ತಾನೆ .

ಇಲ್ಲಿ ತಂದೆ ತಾಯಂದಿರು ಕೊಂಚ ಎಚ್ಚರವಹಸಿ ಮಕ್ಕಳೊಡನೆ time spend ಮಾಡಿದ್ದೆ ಆದರೆ ಜೀವನದಲ್ಲಿ ಎಂಥಾ ಕಷ್ಟ ಬಂದರೂ ಅದನ್ನು ಎದಿರಿಸುವ ಧೈರ್ಯ ಮತ್ತು ಆತ್ಮ ವಿಶ್ವಾಸ ಬಂದಿರುತ್ತದೆ . ಅವನು ಎಂದಿಗೂ ಉತ್ತಮ ಮತ್ತು ಆದರ್ಶ ವಿದ್ಯಾರ್ಥಿ . ಲಿಂಕನ್ನ ಮೇಲಿನ ಮಾತು ಪ್ರತಿಯೊಬ್ಬ ಪೋಷಕನಿಗೆ ಪಾಠವಾಗಬೇಕು .



(೨೦೦೬ - ಸುಧಾ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ )