Sunday, December 14, 2008

ಪತ್ರ

ಆಗ ನಾವು ಅಣ್ಣನ ಜೊತೆ ಚಾಮರಾಜನಗರದಲ್ಲಿ ಇದ್ವಿ , ಅಣ್ಣ JSS ಕಾಲೇಜಿನಲ್ಲಿ ಪ್ರಾಣಿಶಾಸ್ತ್ರದ ಪ್ರಾದ್ಯಪಕರಗಿದ್ದರು.ಆಗ ನಾನಿನ್ನು ಐದನೇ ತರಗತಿಯಲ್ಲಿದ್ದೆ ... ಆಗ ನನ್ನ ಸ್ನೇಹಿತನಿಗೆ ಬರೆದ ಪತ್ರ ಇದು . ಮೊನ್ನೆ ಭುವನೇಶ್ವರಕ್ಕೆ ಹೋದಾಗ ಅವನ ರೂಮಿನಲ್ಲಿ ಸಿಕ್ಕಿದ್ದು , ಏನಿಲ್ಲ ಅಂದ್ರು ಇಪ್ಪತ್ತು ಸಲ ಇದೆ ಪತ್ರವನ್ನು ಓದಿದ್ದೆ .. ನಿಮ್ಮಲ್ಲೂ ಹಂಚಿ ಕೊಳ್ಳುವ ಆಸೆ .

ಪ್ರೀತಿಯ ಗಣೇಶನಿಗೆ,

ಅಣ್ಣ ಮತ್ತು ನಾವೆಲ್ಲರೂ ಇಲ್ಲಿ ಕ್ಷೆಮವಾಗಿದ್ದೇವೆ , ನಿನ್ನ ಕ್ಷೇಮ ಸಮಚಾರಕ್ಕೆ ಪತ್ರ ಬರಿ .
ಹೋದ ವಾರ ನಾವು ಕರಿನಂಜನಪುರದವರ ಮೇಲೆ ಮ್ಯಾಚ್ ಹಾಕಿದ್ದಿವಿ . ನಾವು ಸೋತು ಹೋದೆವು . ತೂಡ್ ಬಾಬು ಎರಡು ಕ್ಯಾಚ್ ಬಿಟ್ಟ . ನಾನು ಮತ್ತು ಅಣ್ಣ ಬೂದಿಪಡಗ ಕಾಡಿಗೆ ಹೋಗಿದ್ದೆವು . ಗಂಟೆ ಗಿರೀಶ ನಾನು ಬರುತ್ತೀನಿ ಅಂತ ಗಲಾಟೆ ಮಾಡುತ್ತಿದ್ದ . ನಾನು ಅಣ್ಣನಿಗೆ ಗೊತ್ತಿಲ್ಲದೇನೆ ಶಾಲೆಗೆ ರಜೆ ಹಾಕಿ ಕರಿವರ್ದನರಾಜನ ಬೆಟ್ಟಕ್ಕೆ ಒಬ್ಬನೇ ಹೋಗಿದ್ದೆ . ಮನೆಯಲ್ಲಿ ತೂಡ್ ಬಾಬು ಬಿಟ್ರೆ ಬೇರೆ ಯಾರಿಗೂ ಗೊತ್ತಿಲ್ಲ , ಬೆಟ್ಟ ಚೆನ್ನಾಗಿತ್ತು . ನೀನು ಮನೆಗೆ ಬಂದಾಗ ಅಣ್ಣನಿಗೆ ಏನು ಹೇಳಬೇಡ .

ಮೊನ್ನೆ ನಾವೆಲ್ಲರೂ ಅಣ್ಣನ ಕಾಲೇಜಿಗೆ ಹೋಗಿದ್ದೆವು , ಅಣ್ಣ ಭೂತಗಾಜಿನಲ್ಲಿ ಅಮೀಬಾ ತೋರಿಸಿದರು . ಸಾಗರದಿಂದ ಶಾಂತಲ ಆಂಟಿ ಬಂದಿದ್ದರು , ನಮಗೆಲ್ಲ ದೇವಿ ಭುವನ ಮನಮೋಹಿನಿ ಹಾಡು ಹೇಳಿಕೊಟ್ಟರು .

ಇಲ್ಲಿ ಬೇರೆ ಏನು ವಿಶೇಷ ಇಲ್ಲ , ನೀನು ಪತ್ರ ಬೇರೆ
ಇಂತಿ
ಸಂತೋಷ

Friday, December 12, 2008

ಪ್ರೀತಿ-ಪ್ರೇಮ ಮತ್ತೊಂದು ನೆನಪು ..

ಪ್ರೀತಿ -ಪ್ರೇಮ ಇದ್ದಕ್ಕೆ ಏನೇ definition ಕೊಟ್ರುನೂ ಯಾವುದು ಸರಿಯಾಗಿ ಆರ್ಥ ಆಗೋಲ್ಲ . ಅದು ಎಷ್ಟೇ ಮುಲಭೂತ ಇಚ್ಚಾ ಕ್ರಿಯೇಯಾಗಿರಬೇಕು ಅಂತ ಪ್ರಯತ್ನಿಸಿದರು ಕೆಲವೊಮ್ಮೆ ಸ್ವಾರ್ಥ ಎಲ್ಲಿಂದಲೂ ಬಂದು ಅಡಗಿ ಕೂತಿರುತ್ತದೆ ....ಎಲ್ಲವನ್ನು ಮತ್ತೆ ತಿದ್ದಿ ಬಿಡೋಣ ಅನ್ನುವಷ್ಟರಲ್ಲಿ ಭಯಂಕರವಾದ ಒಂದು ego ಕಾಡಿಬಿಡುತ್ತೆ..ಸರಿ ಅದೇನೇ ಆಗಲಿ ಹೇಳೇ ಬಿಡೋಣ ... ಇಲ್ಲ ಕಣೇ.. ಎಲ್ಲಾ ನಂದೇ ತಪ್ಪು ದಯವಿಟ್ಟು ಕ್ಷಮಿಸಿಬಿಡು .. ಎಲ್ಲೋ ಒಂದು ಕಡೆ ಇಬ್ಬರು ಬೆಚ್ಚಗೆ ಕುಳಿತು ಕನಸುಗಳನ್ನು ಹೆಕ್ಕಿ ತೆಗೆಯೋಣ. ನಮ್ಮಿಬ್ಬರ ಒಳ್ಳೆತನ , ಕೆಟ್ಟತನ, ಪ್ರೀತಿ, ಕೋಪ ಎಲ್ಲವೂ ನಮ್ಮಿಬ್ಬರಷ್ಟು ಬೇರಾರಿಗೂ ಅರ್ಥವಾಗ್ಲಿಕ್ಕೆ ಸಾದ್ಯ ಇಲ್ಲ .. ನೀನ್ ಹೇಳೋದು ನಿಜ ಕಣೋ ..ನಮ್ಮಿಬ್ಬರ ಒಳ್ಳೆತನ , ಕೆಟ್ಟತನ, ಪ್ರೀತಿ, ಕೋಪ ಎಲ್ಲವೂ ನಮ್ಮಿಬ್ಬರಷ್ಟು ಬೇರಾರಿಗೂ ಅರ್ಥವಾಗ್ಲಿಕ್ಕೆ ಸಾದ್ಯ ಇಲ್ಲ , ಆದ್ರೆ ನಿನ್ನೆಲ್ಲ ತಿಕ್ಕಲುತನಗಳನ್ನು, ನಿನ್ನ ಅಬ್ಯಾಸ-ದುರಭ್ಯಸಗನ್ನು ನನ್ನಿಂದ ಸಹಿಸಲು ಸಾದ್ಯ ಇಲ್ಲ .. I think we both are nothing to do with each other. ಛೆ ! ನನ್ನ ತಿಕ್ಕಲುತನ , ಅದಕ್ಕೊಂದು ಆಕೆಗೆ ನನ್ನ outline. ಎಷ್ಟೊಂದು ಗೋಜಲು ಮಾಡಿಕೊಂಡು ಬಿಟ್ಟಿರ್ತಿವಿ. ಇಲ್ಲ... ನನ್ ಸ್ವಭಾವ ಇದಲ್ಲ ..ನಾನೊಬ್ಬ ತುಂಬಾ Serious ಆದ ಮನುಷ್ಯ . ನನಗೆ ನನ್ನದೇ ಆದ ಸಿದ್ದಾಂತಗಳಿದೆ, ಚಿತ್ರ-ವಿಚಿತ್ರ ಆದರ್ಶಗಳನ್ನು Fevicol ಹಾಕಿಕೊಂಡು ಅಂಟಿಸಿಕೊಂಡಿದ್ದೀನಿ. ನಿಜ ಅದರ ಮೇಲೆ ಬೇರೆ ಯಾರದು ಸಹ ಅದಿಕಾರ ಇರೋದಿಲ್ಲ . . ಆದರು ಕೆಲವೊಮ್ಮೆ ಹೀಗನ್ನಿಸಿದ್ದು ನಿಜ .. ನನ್ನೆಲ್ಲ ಹುಚ್ಚು ಆದರ್ಶಗಳನ್ನು , ಸಿದಾಂತಗಳನ್ನು, ತಿಕ್ಕಲುತನವನ್ನು ಬದಿಗೊತ್ತಿ ಪ್ರಾಮಾಣಿಕವಾಗಿ ಆಕೆಯೊಂದಿಗೆ ಕನಸು ಕಾಣುವ ಆಸೆ ಇನ್ನು ಬಿಟ್ಟು ಹೋಗಿಲ್ಲ .

ನಿನ್ನಲಿರೋ ಈ ಗುಣ ನನಗೆ ಇಷ್ಟ ಆಗ್ಲಿಲ್ಲ ಅನ್ನೋದಿಕ್ಕಿಂತ , ಅದು ನನಗೆ ಅರ್ಥ ಆಗ್ಲಿಲ್ಲ ಕಣೇ ..ಸ್ವಲ್ಪ ಬಿಡಿಸಿ ಹೇಳು ಅಂತ ಕೇಳೋದ್ರಲ್ಲಿ ಹೆಚ್ಚು ಬುದ್ದಿವಂತಿಕೆ ಅಡಗಿದೆ ಅಂತ ನನಿಗೆ ಅರ್ಥವಗೊಷ್ಟರಲ್ಲಿ ..Yes, I also think we both are nothing to do with each other ಅನ್ನೋ ತಿರ್ಮಾನಕ್ಕೆ ಬಂದಾಗಿತ್ತು

ನೆನಪುಗಳೇ ಹಾಗೆ ಎಲ್ಲೂ ಹೋಗಲಾರವು , ಭಾವನೆಯ ಯಾವುದೋ ಒಂದು ನಾದಕ್ಕೆ ಮತ್ತೆ ವಾಪಸ್ ಬಂದು ಗಿರಗಿಟ್ಲೆ ಹೊಡಿತ ಇರುತ್ತೆ .. ಎಂದು ಒಂದು ರಾತ್ರಿ ಸಕತ್ ನಿದ್ದೆ ಮಾಡ್ತಾ ಇರುವಾಗ ಜಲ್ ಅಂತ ಒಂದು ಅಲಾರಂ ಕೊಟ್ಟು ಎಬ್ಬಿಸಿ ಬಿಟ್ಟಿರುತ್ತೆ.

ಪದಗಳಿದ್ದರೂ ಬರೆಯಲು ಆಗ್ತ ಇಲ್ಲ .. ಈ ಪ್ರೀತಿ-ಪ್ರೇಮಗಳೇ ಹೀಗೆ ಎಲ್ಲಾ ಇದ್ದು ಏನೂ ಎಲ್ಲವೇನೂ ..ಎಲ್ಲದಕ್ಕೂ ಒಂದು saftey-vault ಹುಡುಕಿಟ್ಟುಕೊಳ್ಳೋದು ತುಂಬಾ ಕಷ್ಟ

ನ್ಯೂ ಇಯರ್ ... I am going to stop cigerette
ಹೊಸ ವರ್ಷದ ನನ್ನ resolution..
ಅಸಲಿಗೆ ಕಳೆದ ಏಳೆಂಟು ಹೊಸ ವರ್ಷಗಳಿಂದಲೂ ಆ resolution ಬದಲಾಗಿಲ್ಲ

ಖಂಡಿತ ಬದಲಾಗುತ್ತೆ ..

Wednesday, December 10, 2008

ಕ್ರೈಸಿಸ್ಸು ..!!


ಈ ಆರ್ಥಿಕ ಮುಗ್ಗಟ್ಟಿನ ಬಗ್ಗೆ ಅಷ್ಟು ತಲೆ ಕೆಡಿಸಿಕೊಂಡಿರಲಿಲ್ಲ , ಆದ್ರೂ ಅದರ ಬಗ್ಗೆ ಗೊತ್ತಿರುವಷ್ಟು ಏನಾದ್ರೂ ಬರೀಬೇಕು ಅನ್ನಿಸ್ತು .

ಲೆಮನ್ ಬ್ರದರ್ಸ್ ಬ್ಯಾಂಕ್ ದಿವಾಳಿಯಾಗಿ ಹೋಗಿದೆ , ಈ ಬ್ಯಾಂಕು ಅಮೇರಿಕಾದ ನಾಲ್ಕನೆ ಅತಿ ದೊಡ್ಡ ಇನ್ವೆಸ್ಟ್ ಮೆಂಟ್ ಬ್ಯಾಂಕು . ೧೯೨೯ ರಲ್ಲಿ ಆದ great depression ನಲ್ಲೂ ಬದುಕುಳಿದಿತ್ತು , ಬರಿ ಮೂರೇ ತಿಂಗಳಲ್ಲಿ ೨೪೦೦ ಕೋಟಿ ಗಳಷ್ಟು ಲಾಭ ಮಾಡಿತ್ತು . ನಮ್ ಬೆಂಗಳೂರಿನ IIM ಪದವಿದರನ್ನು ಕೆಲ್ಸಕ್ಕೆ ತಗೊಂಡು , ವರ್ಷಕ್ಕೆ ಏನಿಲ್ಲ ಅಂದ್ರು ಒಂದುವರೆ ಕೋಟಿಯಷ್ಟು ಸಂಬಳ ಕೊಟ್ಟು ಸಾಕಿತ್ತು . ಈಗ ಕಥೆ ಏನಾಗಿದೆ ಅಂದ್ರೆ ಆ ಎಲ್ಲಾ ಮೇಧಾವಿಗಳು ಬಟ್ಟೆ ಪ್ಯಾಕ್ ಮಾಡ್ಕೊಂಡು ವಾಪಸ್ ಮನೆಗೆ ಬಂದಿದ್ದಾರೆ .

ಅಸಲಿಗೆ ಕಥೆ ಏನಪ್ಪಾ ಅಂದ್ರೆ - ಅಮೆರಿಕದಲ್ಲಿ ಇರುವ finacial institution ಗಳು ಅಲ್ಲಿ ಇರೋ ಜನಗಳಿಗೆ ಯರ್ರಾ ಬಿರ್ರೀ ಸಾಲ ಕೊಡ್ತು . ಆ ಸಾಲಕ್ಕೆ sub-prime ಅಂತ ಹೆಸರು .. ಮಜಾ ಅಂದ್ರೆ ಈ ಸಾಲ ಆದಾರರಹಿತ ಸಾಲ . ಯಾವ documents ಕೇಳೋಲ್ಲ . ಅದೇ ನಮ್ co-operative ಬ್ಯಾಂಕ್ ಲ್ಲಿ ಸಾಲ ಕೇಳಿ ನೋಡಿ bank statement ಇಂದ ಹಿಡಿದು ಶೆಟ್ಟಿ ಅಂಗಡಿ ಚೀಟಿ ಲೆಕ್ಕದವರೆಗೂ ಕೇಳ್ತಾರೆ . ಕೊನೆಗೆ ಸಾಲನು ಕೊಟ್ಟಿ ಆಯಿತು , ಸಿಕ್ಕಪಟ್ಟೆ ಮನೆಗಳು ಕಟ್ಟಿದಾಯಿತು . ಬ್ಯಾಂಕ್ ನವರು ಕೊಟ್ಟ ಸಾಲಗಳಿಗೆ ಯಾವುದೇ ಸ್ಥಿರವಾದ ಬಡ್ಡಿ ದರ ಇರೋದಿಲ್ಲ ಅದನ್ನು ARM (adjustable rate mortgage) ಅಂತಾರೆ . ಅಮೇರಿಕಾದ ರೆಸೆರ್ವ್ ಬ್ಯಾಂಕ್ ಕೊಡುವ ಬಡ್ಡಿ ದರಕ್ಕೆ ಅನುಗುಣವಾಗಿ ಬಡ್ಡಿ ಕಟ್ ಬೇಕು . ಆ ರೆಸೆರ್ವ್ ಬ್ಯಾಂಕ್ ಇದ್ದಿಕಿದಂತೆ ಬಡ್ಡಿ ಜಾಸ್ತಿ ಮಾಡಿ , ಜನ ಮನೆ ಕಳಕೊಂಡು ಕಾರಲ್ಲಿ ವಾಸ ಮಾಡೋ ಹಾಗೆ ಮಾಡ್ತು .



ಆದರೂ ಸಹ ಈ ಬ್ಯಾಂಕುಗಳು ಮತ್ತೆ ಸಲದ ಮೇಲೆ ಸಾಲ ಕೊಡ್ತಾ ಹೋಯಿತು . ಹೇಗೆ ಅಂದ್ರೆ ನಿಮಗೆ ಯಾವುದೇ ಕೆಲಸ, ಆಸ್ತಿ ಇಲ್ದೆ ಇದ್ರೂ ಪರವಾಗಿಲ್ಲ , ಸಾಲ ಕೊಡಲು ನಾವು ಸಿದ್ದ (NINJA - no income, no job or assets), ಹೀಗೆ ಕೊಟ್ಟು ಕೊಟ್ಟು sub-prime ಸಾಲ ೧೦೦ ಕೋಟಿಗೂ ದಾಟಿ ಹೋಗಿತ್ತು . ಅವ್ರು ಪ್ಲಾನ್ ಏನಪ್ಪಾ ಅಂದ್ರೆ real estate ಬೆಲೆ ಯಾವಾಗ್ಲೂ ಜಾಸ್ತಿ ಇದ್ದೆ ಇರುತ್ತೆ ಅಂತ . ಈ ಬ್ಯಾಂಕುಗಳು ಅವೇ ಕೆಲವೊಂದು ಸಲದ documents ಗಳನ್ನೂ ಸೃಷ್ಟಿ ಮಾಡಿ , ಅಲ್ಲಿ ಇರೋ ದಲ್ಲಾಳಿಗಳಿಗೆ ಮಾರಿ ಸೇಫ್ ಆಗೋಕ್ಕೆ ಪ್ರಯತ್ನ ಪಡ್ತು . ಆ ಸೃಷ್ಟಿ ಮಾಡಿದ್ದ documents ಗಳನ್ನು MBS (mortgage based security) ಅಂತ ನಾಮಕರಣ ಮಾಡಿ .. ಆ ದೇಶದಲ್ಲಿ ಇರೋ insurance ಕಂಪನಿ ಹತ್ತಿರ ವಿಮೆ ಬೇರೆ ಮಡ್ಸ್ಕೊಂದ್ರು ... ಆಮೇಲೆ ಈ MBS ಗಳನ್ನ bond ಗಳಾಗಿ ಪರಿವರ್ತಿಸಿ ಪ್ರಪಂಚದ ಎಲ್ಲಾ ಕಡೆ ಮರೋದಕ್ಕೆ ಶುರು ಮಾಡಿದ್ರು . ಇನ್ನೊಂದು ಮಜಾ ಅಂದ್ರೆ ಆ ಬಾಂಡ್ ಗೆ 50 ರುಪಾಯಿ ಇದ್ರೆ ಲೆಮನ್ ಬ್ಯಾಂಕು 4000 ರೂಪಾಯಿಗೆ ಮಾರಿದ್ದರು ಅದನ್ನ CDO (Collaterised Debt Obligations) ಅಂತ ಅರ್ಥವಾಗದ ಹೆಸರು ಕೊಟ್ಟು , ಜನಗಳನ್ನ Confuse ಮಾಡಿದ್ದರು. ಕೊನೆಗೆ ಮನೆಗಳು ಸಿಕ್ಕಾಪಟ್ಟೆ ಆದ ಮೇಲೆ .. Real estate ಮಕಾಡೆ ಮಲಿಕೊಲ್ತು . ಮನೆ ಹರಾಜಿಗೆ ಕುಗುವವರು ಗತಿ ಇಲ್ಲದ ಹಾಗೆ ಆಯಿತು . ಆಗ ಶುರುವಾಯಿತು ನೋಡಿ ಮಾರಿ ಹಬ್ಬ .

ಭಾರತದಲ್ಲಿದ್ದ ವಿದೇಶಿ ಹೂಡಿಕೆದಾರರು ಬಾಗಿಲು ಮುಚ್ಕೊಂಡು ಓಡಿ ಹೋಗೋಕೆ ಶುರು ಮಾಡಿದ್ರು . ತಲೆ ಮಾಸಿದ ವಿತ್ತ ಮಂತ್ರಿ ಚಿದಂಬರಂ .. ನಮಗೇನು ಆಗಿಲ್ಲ ನಾವು ಭಾರಿ strongu ಅಂತ statement ಕೊಟ್ರು. ಎಲ್ಲಾ ಕಡೆ Globalization ಅದು ಇದು ಅಂತ ಇರೋ ನಾವು ಅಮೆರಿಕಕ್ಕೆ ಹೊಡ್ತ ಬಿದ್ದಿದೆ ಅಂದ್ರೆ , ನಮ್ ದೇಶಕ್ಕೂ ತೊಂದ್ರೆ ಇದೆ ಅಂತ ಚಿದಂಬರಂ ಗೆ ಆಮೇಲೆ flash ಆಯಿತಂತೆ . ಊರೆಲ್ಲ ಕೊಳ್ಳೆ ಹೊಡೆದ ಮೇಲೆ ನಮ್ ಚಿದಂಬರಂ ಅಂಬಾನಿ ಮನೆಗೆ ಹೋಗಿ ಬಾಗಿಲು ಬದ್ರ ಮಾಡಿ ಬಂದರಂತೆ . ಇನ್ನು ನಮ್ ದೇವೇ ಗೌಡ್ರು Global economic crisis ಗೆ ಅಮೇರಿಕಾದ ಪರವಾಗಿ ಚಂಡೀ ಹೋಮ ಮಾಡಿಸ್ತರಂತೆ... ಅದು ಅಲ್ದೇನೆ ಆತ್ಮ ಚರಿತ್ರೆ ಬರೀತೀನಿ ಅಂತ ಕುಂತವ್ರೆ ..ಬಚ್ಚೆ ಗೌಡ್ರು ನಾನು ಕಮ್ಮಿ ಇಲ್ಲ ಕಲ ನಾನು ಬರಿತಿವ್ನಿ ....!

ಐಯ್ಯೋ ಮ್ಯಾಟ್ರು ಎಲ್ಲೆಲ್ಲೊ ಹೊಂಟ್ ಹೋಯಿತು....


ಈಗ ಆರ್ಥಿಕ ಭಿಕ್ಕಟ್ಟಿಗೆ ಪರಿಹಾರ ಅಂದ್ರೆ .. ಯಾವ ಕಂಪೆನಿಗಳು ಕೆಲಸಗರನ್ನು ತೇಗಿ ಬಾರ್ದು.. ಅಲ್ಲಿ ಇಲ್ಲಿ ಬಚಿಟ್ಟಿರೋ ದುಡ್ಡನ್ನು ತೆಗಿ ಬೇಕು . ಜನಗಳಿಗೆ ಖರ್ಚು ಮಾಡಲು ಕೊಡ ಬೇಕು .. ಖರ್ಚ ಆದ್ರೆ ತಾನೆ ನಮ್ ಫ್ಯಾಕ್ಟರಿ ಗಳು production ಮಾಡೋಕೆ ಸಾದ್ಯ . ಶ್ರೀಮಂತರಿಗೆ ಹೆಚ್ಚಿನ ತೆರಿಗೆ ಹಾಕಿ , ಅವರಿಗಿರುವ ರಿಯಾಯಿತಿ ಗಳನ್ನ ನಿಲ್ಲಿಸಬೇಕು . ಅಗತ್ಯ ಇರೋ ವಸ್ತುಗಳ ಬೆಲೆ ಇಳಿಸಬೇಕು .. ಮುಖ್ಯವಾಗಿ UPA ಸರ್ಕಾರ ಶ್ರೀಮಂತರಿಗೆ ಬಕೇಟು ಹಿಡಿಯೋದನ್ನ ಬಿಡಬೇಕು . ಈಗಿರೋ ಗೃಹ ಸಚಿವ ಚಿದಂಬರಂ ಸ್ವಂತ ಗೃಹಗಳನ್ನು ಕಟ್ಟಿಸೋದನ್ನ ಬಿಡ ಬೇಕು (ಛೆ ! ನನ್ ಕೊನೆ ಹೆಸರು ಬೇರೆ ಇಟ್ಟಿಕೊಂಡು ಬಿಟ್ಟಿದಾರೆ .. ಇಲ್ಲ ಅಂದಿದ್ದರೆ!! )

Friday, December 5, 2008

ಸಂಭಂದ , ಕವಿತೆ .. etc

ಮೊನ್ನೆ ನನ್ ಅಣ್ಣ ಫೋನ್ ಮಾಡಿ - " ಸಂತೋಷಾ , ಯಾವಗಪ್ಪ ಮದುವೆ ಆಗ್ತಿಯ ? ವಯಸ್ಸು ಆಗ್ತಾ ಬಂದಲಪ್ಪ ? ಏನ್ ಕಥೆ ನಿಂದು ..? ಹೀಗೆ ಪ್ರಶ್ನೆ ಮೇಲೆ ಪ್ರಶ್ನೆ .. ನಾನಿದ್ದವನು ಏನೂ ಒಂದು ಹಾರಿಕೆ ಉತ್ತರ ಕೊಟ್ಟು ಸುಮ್ಮನಾದೆ . ಒಬ್ಬನೇ ಕೂತು ಯೋಚನೆ ಮಾಡ್ತಾ , ನಾನಗೆ ಹಾಳು ಮಾಡಿಕೊಂಡ ಸಂಬದಗಳು , ಅವೇ ಕಳಚಿಕೊಂಡದ್ದು , ಹೆಸರೇ ಇಲ್ಲದ ಕೆಲವು ಸಂಭಂದಗಳು ...ಎಲ್ಲ ಸಂಬದಗಳು ಹಾಗೆ .. ಯಾವಕ್ಕು ಸರಿಯಾಗಿ ಈಜು ಬರೋದಿಲ್ಲ . ಭಾವಗಳ ಬಾವಿಯಲ್ಲಿ ಬಿದ್ದು ಒದ್ದಾಡ್ತಾ ಇರುತ್ತೆ . ಎಲ್ಲದಕ್ಕೂ ಹಗ್ಗ ಕಟ್ಟಿ ಮೇಲೆತ್ತುವಷ್ಟರಲ್ಲಿ ಮತ್ತೊಂದಷ್ಟು ಬಾವಿಗೆ ಬಿದ್ದಿರುತ್ತೆ ... ಯಾವುದೂ ಒಂದು ಪುಸ್ತಕದಲ್ಲಿ ಓದಿದ ನೆನಪು - Don't put too much emotional weight on any relationship

****************************************************************************

ರೀ ಸಂತೋಷ್ , ತುಂಬ ಚೆನ್ನಾಗಿ ಕವಿತೆ ಬರಿತಿರಿ , ನೀವ್ ಕವಿನ ? - ಹೀಗೊಬ್ಬಕೆ ಕೇಳಿದ ಪ್ರಶ್ನೆಗೆ ನಗು ತಡೆಯಲಾಗಲಿಲ್ಲ !

ಇಲ್ಲ ಕಣಮ್ಮ ನಾನ್ ಕವಿ ಅಲ್ಲ , ಕವಿತೆ ಬರೆದ ಮಾತ್ರ ಕವಿ ಆಗೋಕೆ ಸಾದ್ಯ ಇಲ್ಲ . ನಮಗೆ ಅಂಟಿ ಎಷ್ಟೋ ಮನೋಪ್ರವ್ರುತ್ತಿಗಳಲ್ಲಿ ಕವಿತೆ, ಬರಹ ಸಹ ಒಂದು . ಆಕೆಗೆ ಮನೋಪ್ರವೃತ್ತಿ ಅಂದ್ರೆ ಏನು ಅಂತ ತಿಳಿಸಿ ಹೇಳೋಷ್ಟರಲ್ಲಿ ...ಯಪ್ಪಾ ! ಸಾಕ್ ಸಕಗೊಯಿತು .

****************************************************************************

ಯು.ಎಸ್ ರಿಟರ್ನ್ ಗೆಳೆಯನೊಬ್ಬನ ನಡೆ/ನುಡಿ ಪಾಯಿಂಟ್ ಗಳು

೧. In US ಅಥವಾ When I was in US.... ಆಮೇಲೆ ಮಿಕ್ಕಿದ್ದು

೨. "Still I am feeling that essence of Jet Lag" - ಬಡ್ಡಿ ಮಗ ಅಲ್ಲಿಂದ ವಾಪಸ್ ಬಂದು ನಾಲ್ಕು ತಿಂಗಳು ಆಗಿರತ್ತೆ

೩. ಏರ್ಪೋರ್ಟ್ ನಲ್ಲಿ ಬ್ಯಾಗಿಗೆ ಅಂಟಿಸಿದ್ದ , ಏರ್ವೇಸ್ ಸ್ಟಿಕರ್ ಒಂದು ವರ್ಷ ಆದರು ತೆಗ್ದಿರೋದಿಲ್ಲ - ಬಿಟ್ರೆ ಹಣೆ ಮೇಲೆ ಅಂಟುಸ್ಕೊಂಡು ಓಡಾಡೋದೊಂದು ಬಾಕಿ

೪. Table Manners ಬಗ್ಗೆ ಎರಡು ಗಂಟೆ ಲೆಕ್ಚರ್ - ( ಬಿಡ್ಲಾ ಸಾಕು ನಾನು ಒಂದ್ ವರ್ಸ ಪೈವ್ ಸ್ಟಾರ್ ಹೋಟ್ಲು ನಲ್ಲಿ ಮಣ್ಣ ಹೊತ್ತಿವ್ನಿ .. ನಂಗು ವಸಿ ಗೊತ್ತೈತೆ ಅಂತ ಹೇಳಿ ಬಾಯಿ ಮುಚ್ಚಿಸಿದ್ದಯಿತು)

೫. ಯಾವ್ ಬ್ರಾಂಡ್ ಎಣ್ಣೆಗೆ ಏನ್ ಮಿಕ್ಸ್ ಮಾಡಿದ್ರೆ ಎಷ್ಟು ಕಿಕ್ ಕೊಡುತ್ತೆ ಅನ್ನೋದು (ಹಂಗೆ ಹೇಳ್ದೊನು ಒಂದ್ ದಿನ ಫುಲ್ ಟೈಟ್ ಆಗಿ , ಕಲರ್ ಕಲರ್ ವಾಂತಿ ಮಾಡ್ಕೊಂಡಿದ್ದ ... ಯಾಕ್ಲ ಹಿಂಗಾಯಿತು ಅಂತ ಕೇಳಿದಿಕ್ಕೆ, ಸ್ಥಳ ಮಹಾತ್ಮೆ ಅಂತಾನೆ )

೬. ಯಾಕ್ಲ ಇಂಡಿಯಾಗೆ ವಾಪಸ್ ಬಂದೆ ಅಲ್ಲೇ ಇರಬೇಕಾಗಿತ್ತು ಅಂತ ಕೇಳಿದ್ರೆ .....No man, ಅಲ್ಲೂ ಸಿಕ್ಕಾಪಟ್ಟೆ ಕಾಸ್ಟ್ ಕಟ್ಟಿಂಗು. ಟಾಯ್ಲೆಟ್ ಪೇಪರ್ ನ ಎರಡು ಕಡೆ use ಮಾಡಿ ಅಂತಾರೆ !!